Shree Sangameshwar Clinic, Bilgi

Shree Sangameshwar Clinic, Bilgi Welcome to our Shree Sangameshwar Clinic Bilagi official page dedicated to raising awareness about important health topics.

Join us as we discuss the latest trends in healthcare, share tips for maintaining a healthy lifestyle.

ಕನ್ನಡದ ಮೇರು ಸಾಹಿತಿ,ನಾಡಿನ ಸಾಕ್ಷಿಪ್ರಜ್ಞೆದೇವನೂರು ಮಹಾದೇವ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ...
10/06/2026

ಕನ್ನಡದ ಮೇರು ಸಾಹಿತಿ,
ನಾಡಿನ ಸಾಕ್ಷಿಪ್ರಜ್ಞೆ
ದೇವನೂರು ಮಹಾದೇವ ಅವರಿಗೆ
ಹುಟ್ಟು ಹಬ್ಬದ ಶುಭಾಶಯಗಳು ...

ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದ ರಂಗಕರ್ಮಿ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಪುಣ್ಯತಿಥಿಯಂದ...
10/06/2026

ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದ ರಂಗಕರ್ಮಿ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು.

ಇರುವಾಗ ಪ್ರಪಂಚವನ್ನು ನೋಡಿ ಆನಂದಿಸುತ್ತೇವೆ, ಸತ್ತಮೇಲೂ ಪ್ರಪಂಚ ನೋಡಬೇಕಾದರೆ ನೇತ್ರದಾನ ಮಾಡಿ, ಜಗತ್ತೇ ಕತ್ತಲಾದ ಸಾವಿರಾರು ಅಂಧರಿಗೆ ನಮ್ಮ ದೃ...
10/06/2026

ಇರುವಾಗ ಪ್ರಪಂಚವನ್ನು ನೋಡಿ ಆನಂದಿಸುತ್ತೇವೆ, ಸತ್ತಮೇಲೂ ಪ್ರಪಂಚ ನೋಡಬೇಕಾದರೆ ನೇತ್ರದಾನ ಮಾಡಿ, ಜಗತ್ತೇ ಕತ್ತಲಾದ ಸಾವಿರಾರು ಅಂಧರಿಗೆ ನಮ್ಮ ದೃಷ್ಟಿ ಬೆಳಕು ಕೊಡುವುದಾದರೆ ಈ ಹುಟ್ಟು ಸಾವಿನಲ್ಲೂ ಸಾರ್ಥಕವಾಗುವ ಕ್ಷಣ ನಮ್ಮದಾಗಬೇಕು.
On the occasion of World Eye Donation Day, we should take a resolve to donate eye donation, bring awareness about it in the society and bring new light into the life of a blind person. So that we can share happiness in someone's life even after leaving.

ಪದ್ಮಶ್ರೀ ಪುರಸ್ಕೃತ ಬಿ.ಜಯಶ್ರೀ ಕನ್ನಡನಾಡು ಕಂಡ ಅಪರೂಪದ ರಂಗಕರ್ಮಿ, ಚಿತ್ರನಟಿ ಮತ್ತು ಗಾಯಕಿ. ಇವರು ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣನವರ ಮೊ...
09/06/2026

ಪದ್ಮಶ್ರೀ ಪುರಸ್ಕೃತ ಬಿ.ಜಯಶ್ರೀ ಕನ್ನಡನಾಡು ಕಂಡ ಅಪರೂಪದ ರಂಗಕರ್ಮಿ, ಚಿತ್ರನಟಿ ಮತ್ತು ಗಾಯಕಿ. ಇವರು ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣನವರ ಮೊಮ್ಮಗಳು. ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ಇವರು ಮುಂದೆ ನಾಟಕಗಳ ನಿರ್ದೇಶನಕ್ಕೂ ಇಳಿದರು. ರಂಗಾಯಣದ ಮುಖ್ಯಸ್ಥರಾಗಿ ,ರಾಜ್ಯಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರು ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ಪಡೆದಿದ್ದಾರೆ. ಕೆಲವು ಚಿತ್ರಗಳಲ್ಲಿ ಅಭಿನಯಿಸಿದ ಇವರು ಕೆಲವು ಪರಭಾಷಾ ನಟಿಯರಿಗೆ ಧ್ವನಿ ನೀಡಿದ್ದಾರೆ. ಕಿರುತೆರಯಲ್ಲಿ `ಪ್ರೀತಿ ಇಲ್ಲದ ಮೇಲೆ' ಮುಂತಾದ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಕರುನಾಡ ಕಂಡ ಅಪರೂಪದ ಪ್ರತಿಭೆಗೆ ಹುಟ್ಟುಹಬ್ಬದ ಶುಭಾಶಯಗಳು.

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಜನನಾಯಕ ಬಿರ್ಸಾ ಮುಂಡಾ ಅವರ ಪುಣ್ಯ ತಿಥಿಯಂದು ಅವರಿಗೆ ಅನಂತ ನಮನಗಳು.‎Tributes to Dharti Aaba Bhagwan...
09/06/2026

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಜನನಾಯಕ ಬಿರ್ಸಾ ಮುಂಡಾ ಅವರ ಪುಣ್ಯ ತಿಥಿಯಂದು ಅವರಿಗೆ ಅನಂತ ನಮನಗಳು.

Tributes to Dharti Aaba Bhagwan Birsa Munda on his death anniversary.
His fearless struggle for the rights and dignity of tribal communities remains a timeless symbol of courage and nationalism. 🙏


ಕರ್ನಾಟಕದ ಭಗತಸಿಂಗ್ ‘ಎಂದೇ ಕರೆಯಲ್ಪಡುವ ಶ್ರೀ ಮೈಲಾರ ಮಹಾದೇವ,1930ರಲ್ಲಿ ಮಹಾತ್ಮಗಾಂಧಿಯವರ ದಂಡಿ ಸತ್ಯಾಗ್ರಹದಲ್ಲಿ ಕರ್ನಾಟಕದ ಏಕೈಕ ವ್ಯಕ್ತಿ ...
08/06/2026

ಕರ್ನಾಟಕದ ಭಗತಸಿಂಗ್ ‘ಎಂದೇ ಕರೆಯಲ್ಪಡುವ ಶ್ರೀ ಮೈಲಾರ ಮಹಾದೇವ,1930ರಲ್ಲಿ ಮಹಾತ್ಮಗಾಂಧಿಯವರ ದಂಡಿ ಸತ್ಯಾಗ್ರಹದಲ್ಲಿ ಕರ್ನಾಟಕದ ಏಕೈಕ ವ್ಯಕ್ತಿ ಭಾಗವಹಿಸಿದ್ದು ಇತಿಹಾಸ.
ಸ್ವತಂತ್ರ ಸೇನಾನಿ ಶ್ರೀ ಮೈಲಾರ ಮಹಾದೇವಪ್ಪನವರು ‘ಕ್ವೀಟ್ ಇಂಡಿಯಾ ಚಳುವಳಿ’ ಹೋರಾಟಗಾರ,
ಬ್ರಿಟಿಷರಿಗೆ ‘ಸಿಂಹಸ್ವಪ್ನ’ವಾಗಿದ್ದ ಮೈಲಾರ ಮಹಾದೇವಪ್ಪನವರು ಎಪ್ರಿಲ್ ೧,೧೯೪೩ರಂದು ಹುತಾತ್ಮರಾದರು.

ಅದು ಸ್ವಾತಂತ್ರ್ಯದ ಕಿಚ್ಚು ದೇಶದೆಲ್ಲೆಡೆ ಹೊತ್ತಿ ಉರಿಯುತ್ತಿದ್ದ ಕಾಲ. ಬ್ರಿಟಿಷರು ಗಾಂಧೀಜಿಯ ‘ಸತ್ಯಾಗ್ರಹ’ವೆಂಬ ಹೊಸ ಅಸ್ತ್ರಕ್ಕೆ ಬೆಚ್ಚಿಬಿದ್ದಿದ್ದರು. ಅದೇ ಸಮಯದಲ್ಲಿ ಕರ್ನಾಟಕದಲ್ಲೂ ಗಾಂಧೀಜಿಯ ಹೋರಾಟದಿಂದ ಪ್ರೇರೇಪಿತನಾದ ಒಬ್ಬ ಹುಡುಗ ಸ್ವಾತಂತ್ರ್ಯಗಂಗೆಗೆ ಧುಮುಕಿದ್ದ. ಆ ಹುಡುಗನೇ ಮೈಲಾರ ಮಹಾದೇವಪ್ಪ.
ಮೈಲಾರ ಮಹಾದೇವಪ್ಪ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜೂನ್ 8, 1911ರಲ್ಲಿ ಜನಿಸಿದರು. ತಾಯಿ ಬಸಮ್ಮ, ತಂದೆ ಮಾರ್ತಾಂಡಪ್ಪ. ಮಹಾದೇವಪ್ಪನವರು ಬಾಲ್ಯದಿಂದಲೇ ರಾಷ್ಟ್ರಪ್ರೇಮಿಯಾಗಿದ್ದರು. ಹರ್ಡೇಕರ್ ಮಂಜಪ್ಪ, ಗಳಗನಾಥರು ಹಾಗೂ ಲೋಕಮಾನ್ಯ ತಿಲಕರು ಅದಕ್ಕೆ ಪ್ರೇರಣೆ.
ವಿಶೇಷವೆಂದರೆ 1930 ಫೆಬ್ರವರಿ 13 ರಂದು ಸಬರಮತಿ ಆಶ್ರಮದಿಂದ ದಂಡಿವರೆಗೆ ಪಾದಯಾತ್ರೆ ನಡೆಸಬೇಕೆಂದು ಗಾಂಧಿ ನಿರ್ಧಾರ ಮಾಡುತ್ತಾರೆ. ಆ ಪಾದಯಾತ್ರೆಗೆ ಕರ್ನಾಟಕದಿಂದ ಹೋದ 19 ವರ್ಷದ ಏಕೈಕ ತರುಣನೆಂದರೆ ಅದು ಮೈಲಾರ ಮಹಾದೇವಪ್ಪ. ದಂಡಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಬ್ರಿಟಿಷ್ ಸರ್ಕಾರ ಮೈಲಾರ ಮಹಾದೇವಪ್ಪನವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸುತ್ತದೆ.
ಹೇಳಬೇಕೆಂದರೆ ಮೈ ಮನಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ತುಂಬಿಕೊಂಡಿದ್ದ ತರುಣ ಮೈಲಾರಪ್ಪ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. 1943ರಲ್ಲಿ ಮೈಲಾರ ಮಹಾದೇವಪ್ಪನವರ ಕಣ್ಣು ಕಂದಾಯ ಕೇಂದ್ರವಾಗಿದ್ದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಬೀಳುತ್ತೆ. ಬ್ರಿಟಿಷರ ಕಂದಾಯ ನೀತಿ ವಿರೋಧಿಸಿ 1943 ಏಪ್ರಿಲ್ ಒಂದರಂದು ಭಾರತ್ ಮಾತೆಯ ಘೋಷಣೆ ಕೂಗುತ್ತಾ ವೀರಭದ್ರೇಶ್ವರ ಗುಡಿ ಪ್ರವೇಶಿಸುತ್ತಾರೆ. ಆದ್ರೆ ಮೋಸದಿಂದ ಮೊದಲೇ ದೇವಸ್ಥಾನದಲ್ಲಿ ಅವಿತು ಕುಳಿತಿದ್ದ ಬ್ರಿಟಿಷರು ಗುಂಡು ಹಾರಿಸುತ್ತಾರೆ. ಮಹಾದೇವಪ್ಪ ಹುತಾತ್ಮರಾಗುತ್ತಾರೆ.
ಆಗ ಅವರ ವಯಸ್ಸು ಕೇವಲ 32.
ಸ್ವಾತಂತ್ರ್ಯದ ಕಿಡಿಯೊಂದು ಪ್ರಕಾಶಿಸುವ ಮೊದಲೇ ನಂದಿಹೋಗಿತ್ತು.
ಅವರ ಹೋರಾಟ, ರಾಷ್ಟ್ರಪ್ರೇಮ, ಸಾಹಸ ಇವತ್ತಿಗೂ ದೇಶಕ್ಕೆ ಸ್ಫೂರ್ತಿಯಾಗಿದೆ.

ಮೈಲಾರ ಮಹಾದೇವಪ್ಪನವರ ಜಯಂತಿಯಂದು ಗೌರವ ನಮನಗಳು.

ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮ...
08/06/2026

ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ನಿರಂತರವಾಗಿ ದುಡಿದವರು. ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು, ಅಖಿಲಭಾರತ ಮಟ್ಟದಲ್ಲಿ ಜರುಗಿದ ೬೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು.

ಭೂಮಿಗೆ ಜೀವ ಸಂಕುಲದ ಪರಿಚಯವಾಗಲು ಮೊದಲು ಸಾಗರದಲ್ಲಿ ಹುಟ್ಟಿದ ಜೀವಸಂಕುಲ ಕಾರಣ ಎಂಬ ನಂಬಿಕೆ ಇದೆ. ವಿಶ್ವ ಸಾಗರಗಳ ದಿನವಾದ ಇಂದು, ಸಮುದ್ರದಲ್ಲಿ...
08/06/2026

ಭೂಮಿಗೆ ಜೀವ ಸಂಕುಲದ ಪರಿಚಯವಾಗಲು ಮೊದಲು ಸಾಗರದಲ್ಲಿ ಹುಟ್ಟಿದ ಜೀವಸಂಕುಲ ಕಾರಣ ಎಂಬ ನಂಬಿಕೆ ಇದೆ. ವಿಶ್ವ ಸಾಗರಗಳ ದಿನವಾದ ಇಂದು, ಸಮುದ್ರದಲ್ಲಿರುವ ಜೀವಸಂಕುಲ ಉಳಿಸುವ, ಪರಿಸರ ಸಮತೋಲನಕ್ಕೆ ಜಲಚರಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ನಿರ್ಣಯ ಮಾಡೋಣ.

It is believed that life on the planet of earth first originated in the depths of oceans. The ocean ecosystem is amazingly diverse. Today as the world celebrates Oceans Day, let us preserve the life and livelihood it sustains.

ಇಂದು ವಿಶ್ವ ಬ್ರೈನ್ ಟ್ಯೂಮರ್ ದಿನ. ಮೆದುಳಿನ ನರಗಳ ಅಸಹಜ ಬೆಳವಣಿಗೆಯಿಂದ ಬರುವ ಈ ಕಾಯಿಲೆ ವಾಸಿಯಾಗುವುದಾಗಿದ್ದು, ಆತ್ಮ ವಿಶ್ವಾಸದಿಂದ ಎದುರಿಸಬ...
08/06/2026

ಇಂದು ವಿಶ್ವ ಬ್ರೈನ್ ಟ್ಯೂಮರ್ ದಿನ. ಮೆದುಳಿನ ನರಗಳ ಅಸಹಜ ಬೆಳವಣಿಗೆಯಿಂದ ಬರುವ ಈ ಕಾಯಿಲೆ ವಾಸಿಯಾಗುವುದಾಗಿದ್ದು, ಆತ್ಮ ವಿಶ್ವಾಸದಿಂದ ಎದುರಿಸಬೇಕು.

World Brain Tumor Day is observed on June 8 to spread awareness and educate people about brain tumors.

Know the symptoms of Brain Tumor for early detection and treatment.

Address

Bilgi

Opening Hours

Monday 10am - 1:30pm
5pm - 8:30pm
Tuesday 10am - 1:30pm
5pm - 8:30pm
Wednesday 10am - 1:30pm
5pm - 8:30pm
Thursday 10am - 1:30pm
5pm - 8:30pm
Friday 10am - 1:30pm
5pm - 8:30pm
Saturday 10am - 1:30pm
5pm - 8:30pm
Sunday 10am - 1:30pm
5pm - 8:30pm

Telephone

+919448959659

Alerts

Be the first to know and let us send you an email when Shree Sangameshwar Clinic, Bilgi posts news and promotions. Your email address will not be used for any other purpose, and you can unsubscribe at any time.

Contact The Business

Send a message to Shree Sangameshwar Clinic, Bilgi:

Share